WELCOME TO MOUNT ST JOSEPH. CONNECTING JESUITS AND FRIENDS

Thursday, August 25, 2011

ಭಾರತ ಅಂದು-ಇಂದು

ಒಂದಾನೊಂದು ಕಾಲದಲ್ಲಿ ಭರತನು ಕಟ್ಟಿದ ನಾಡು
ಹಲವು ಜಾತಿ, ಧರ್ಮ, ಭಾಷೆಗಳ ಬೀಡು
ಎಲ್ಲರ ಮೈಮನ ಸೆಳೆಯುವ ಸುಂದರ ನಾಡು
ಅದುವೇ ನಮ್ಮ ಭಾರತ ನಾಡು

ಶಾಂತಿ-ಕ್ರಾಂತಿ, ಹಿಂಸೆ-ಅಹಿಂಸೆ ಎಂಬ ಬಲಿಷ್ಠ ಅಸ್ತ್ರದಿಂದ
ಹೊರದಬ್ಬಿದರು ಪರಕೀಯರನ್ನು ನಾಡಿನಿಂದ
ಸ್ವಾತಂತ್ರ್ಯವನ್ನು ಕೊಡುಗೆಯಾಗಿ ನೀಡಿದರು ನಮಗೆ
ಕಾಪಾಡಿ, ರಕ್ಷಿಸಿ ಆಡಳಿತವ ಮಾಡಿ ಎಂದು ಹೇಳಿದರುನಮಗೆ

ನಿಶಕ್ತಿಯಿಂದ ಬಳಲುತ್ತಿದೆ ನಾಡು ಭ್ರಷ್ಟಾಚಾರ ಎಂಬ ರೋಗದಿಂದ
ರೋಗ ಸೃಷ್ಟಿಯಾಗಿ ಹರಡುತ್ತಿರುವುದು ಯಾರಿಂದ?
ನಮ್ಮೆಲ್ಲರ ದುರಾಸೆ, ಸ್ವಾರ್ಥಕತೆಯ ಪಾಪದ ಕೊಡದಿಂದ
ನಮ್ಮಿಂದ ಭರ್ತಿಯಾದ ಪಾಪದ ಕೊಡ ನಾವೇ ದೂರ ಚೆಲ್ಲಬೇಕು
ಬನ್ನಿ, ಕೈ ಜೋಡಿಸಿ ಭ್ರಷ್ಟಾಚಾರ ಎಂಬ ಪಾಪದ ಕೊಡವನ್ನು ಕಿತ್ತೊಗೆಯಬೇಕು
ಪುನಃ ನಮ್ಮ ನಾಡಿನ ವೈಭವ ಸರ್ವದಿಕ್ಕುಗಳಲ್ಲಿ ಪ್ರಜ್ವಲಿಸಬೇಕು.
( ಕವನವನ್ನು ಬರೆದವರು ಜೋಯಲ್ ಸಂದೀಪ್)

No comments: